ಕರಣ್ ಥಾಪರ್ (ಕಶ್ಮೀರಿ/ಹಿಂದಿ: करन थापर), ೧೯೫೫ರ ನವೆಂಬರ್ ೫ರಂದು,ಭಾರತದ ಜಮ್ಮು & ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದರು, ದೇಶದ ಅತ್ಯಂತ ಗುರುತಿಸಲ್ಪಡುವ ದೂರದರ್ಶನದ ವೀಕ್ಷಣೆಗಾರರು ಹಾಗೂ ಸಂದರ್ಶನಕಾರರಲ್ಲೊಬ್ಬರಾಗಿದ್ದಾರೆ ಇವರು ಜನರಲ್ .. ಥಾಪರ್ ಹಾಗೂ ಶ್ರೀಮತಿ, ಬಿಮ್ಲಾ ಥಾಪರ್ ದಂಪತಿಗಳ ಕಿರಿಯ ಪುತ್ರರಾಗಿದ್ದಾರೆ. == ಶಿಕ್ಷಣ == ದಿ ಡೂನ್ ಶಾಲೆ ಹಾಗೂ ಸ್ಟೊವ್ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ , ೧೯೭೭ರಲ್ಲಿ ಕೇಂಬ್ರಿಡ್ಜ್‌ನ ಪೆಂಬ್ರೋಕ್ ಕಾಲೇಜ್‌ನಲ್ಲಿ ಅರ್ಥಶಾಸ್ತ್ರ ಮತ್ತು ರಾಜಕೀಯ ತತ್ವಜ್ಞಾನದಲ್ಲಿ ಪದವಿಯನ್ನು ಪಡೆದರು ಅದೇ ವರ್ಷ ಅವರು ಕೇಂಬ್ರಿಡ್ಜ್ ಯೂನಿಯನ್‌ನ ಅಧ್ಯಕ್ಷರಾಗಿದ್ದರು. ಆನಂತರದಲ್ಲಿ ಆಕ್ಸ್‌ಫರ್ಡ್‌ನ ಸೇಂಟ್ ಆಂಟೊನಿ ಕಾಲೇಜಿನಿಂದ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಡಾಕ್ಟರೇಟ್ ಗಳಿಸಿದರು. == ವೃತ್ತಿಜೀವನ == ನೈಜೀರಿಯಾದ ಲಾಗೋಸ್‌ನಲ್ಲಿನ ದಿ ಟೈಮ್ಸ್ ಪತ್ರಿಕೆಯನ್ನು ಸೇರುವ ಮೂಲಕ ಪತ್ರಿಕೋದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು, ಮತ್ತು ನಂತರದಲ್ಲಿ ೧೯೮೧ರವರೆಗೆ ಇಂಡಿಯನ್ ಸಬ್‌ಕಾಂಟಿನೆಂಟ್‌ನಲ್ಲಿ ಬರಹಗಾರರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ೧೯೮೨ರಲ್ಲಿ ಅವರು ಲಂಡನ್ ವೀಕೆಂಡ್ ಟೆಲಿವಿಷನ್‌ ನಲ್ಲಿ ಸೇರಿ ೧೧ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರದಲ್ಲಿ ಅವರು ಇಂಡಿಯಾಕ್ಕೆ ತೆರಳಿ ದಿ ಹಿಂದುಸ್ಥಾನ್ ಟೈಮ್ಸ್ ಟೆಲಿವಿಷನ್ ಗ್ರೂಪ್ , ಹೋಮ್ ಮತ್ತು ಯುನೈಟೆಡ್ ಟೆಲಿವಿಷನ್ ನಲ್ಲಿ ಕಾರ್ಯ ನಿರ್ವಹಿಸಿ ನಂತರದಲ್ಲಿ ತಮ್ಮ ಸ್ವತಃ ನಿರ್ಮಾಣದ Televisionಅನ್ನು ಆಗಸ್ಟ್ ೨೦೦೧ರಲ್ಲಿ ಪ್ರಾರಂಭಿಸಿದರು, ಅದು , ದೂರದರ್ಶನ ಮತ್ತು ಚಾನಲ್ ನ್ಯೂ ಏಷಿಯಾಗಳಿಗೆ ಕಾರ್ಯಕ್ರಮಗಳನ್ನು ನಿರ್ಮಿಸಿ ಕೊಡುತ್ತಿತ್ತು. ಪ್ರಸ್ತುತ Televisionನ ಅಧ್ಯಕ್ಷ, ಥಾಪರ್ ಅವರು ಪ್ರಮುಖ ರಾಜಕೀಯ ವ್ಯಕ್ತಿಗಳೊಂದಿಗೆ ಮತ್ತು ಪ್ರಖ್ಯಾತಿ ಹೊಂದಿದ ವ್ಯಕ್ತಿಗಳೊಂದಿಗೆ ನಡೆಸಿಕೊಡುವ ಆಕ್ರಮಣಕಾರಿ ಸಂದರ್ಶನಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ - ಅವರು ನಡೆಸಿಕೊಟ್ಟ ಕ್ರಿಕೆಟಿಗ ಕಪಿಲ್ ದೇವ್ ( ದೇವ್ ಅವರು ಕಣ್ಣೀರು ಸುರಿಸಿದ್ದರು)[೧], ಜಾರ್ಜ್ ಫರ್ನಾಂಡಿಸ್ , ಜಯಲಲಿತಾ, ಇಂಡಿಯಾದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಜನರಲ್ ಪರ್ವೆಜ್ ಮುಷರಫ್, ಬೆನಜೀರ್ ಬುಟ್ಟೋ, ರಾಜ್ಯದ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಮತ್ತು ದಲೈ ಲಾಮ ಅವರೊಂದಿಗಿನ ಸಂದರ್ಶನಗಳು ವಿಶೇಷವಾಗಿ ಮನದಾಳದಲ್ಲಿ ಉಳಿಯುತ್ತವೆ.ಅವರ ಕೆಲವು ಪ್ರದರ್ಶನಗಳನ್ನು ವೀಕ್ಷಿಸಿ ಹೊಗಳಿಕೆಗೆ ಪಾತ್ರವಾದ ಕೆಲವು ಕಾರ್ಯಕ್ರಮಗಳೆಂದರೆ 'ಐವಿಟ್‌ನೆಸ್ , ಟುನೈಟ್ ಅಟ್ 10 , ಇನ್ ಫೋಕಸ್ ವಿತ್ ಕರಣ್ , ಲೈನ್ ಆಫ್ ಫೈರ್ ಮತ್ತು ವಾರ್ ಆಫ್ ವರ್ಡ್ಸ್ .ಅವರು ನಲ್ಲಿ ಡೆವಿಲ್ಸ್ ಅಡ್ವೊಕೇಟ್ ಹಾಗೂ ೧೮ನಲ್ಲಿ ಇಂಡಿಯಾ ಟುನೈಟ್ ಪ್ರದರ್ಶನಗಳಲ್ಲಿ ಹೆಡ್‌ಲೈನ್‌ಗಳನ್ನು ಪ್ರದರ್ಶನಗಳನ್ನು ನೀಡುತ್ತಾ ಬಂದರು. ಥಾಪರ್ ಅವರು ವಾರ್ತಾಪತ್ರಿಕೆಗಳ ಫಲಪ್ರದ ಅಂಕಣಕಾರರೂ ಹೌದು. ಅವರ ದಿ ಹಿಂದೂಸ್ಥಾನ್ ಟೈಮ್ಸ್‌ನ (ಇಂಡಿಯಾದ ಎರಡನೆಯ ಅತಿ ದೊಡ್ಡ ಇಂಗ್ಲಿಷ್ ದಿನಪತ್ರಿಕೆ) ಪ್ರತಿ ವಾರದ ಅಂಕಣ ಸಂಡೆ ಸೆಂಟಿಮೆಂಟ್ಸ್ ವ್ಯಾಪಕವಾದ ಓದುಗರನ್ನು ಹೊಂದಿದೆ ಮತ್ತು ಬಹಳ ಚನ್ನಾಗಿ ಜನರಿಂದ ಸ್ವೀಕರಿಸಲ್ಪಟ್ಟಿದೆ. == ಪ್ರಶಸ್ತಿಗಳು ಮತ್ತು ಸಂದ ಗೌರವಗಳು == ಇವರು 2003ರ ಡಿಸೆಂಬರ್‌ನಲ್ಲಿ ಏಷಿಯನ್ ಟೆಲಿವಿಷನ್ ಅವಾರ್ಡ್ಸ್‌ನಲ್ಲಿ ಪ್ರಸಕ್ತ ವಿದ್ಯಮಾನಗಳ ವರ್ಗಕ್ಕೆ ನೀಡುವ ಪ್ರಶಸ್ತಿಗಳೆರಡನ್ನೂ ಪಡೆದ ಮೊದಲ ವ್ಯಕ್ತಿಯಾದರು. ಕೋರ್ಟ್ ಮಾರ್ಶಿಯಲ್‌ ನಲ್ಲಿ ನಡೆಸಿಕೊಟ್ಟ ಪಾಕೀಸ್ತಾನದ ವಿದೇಶಾಂಗ ಸಚಿವ, ಖುರ್ಷಿದ್ ಕಸೂರಿಯವರ ಜೊತೆಗಿನ ಸಂದರ್ಶನ ವು ’ಉತ್ತಮ ಕರೆಂಟ್ ಅಫೈರ್ಸ್ ಪ್ರೋಗ್ರಾಮ್’ ಪ್ರಶಸ್ತಿಯನ್ನು ಗಳಿಸಿತು. ಅವರ ಬಹಳಷ್ಟು ದಿನಗಳವರೆಗೆ ನಡೆದ BBCಯ ಜನಪ್ರಿಯ ಶ್ರೇಣಿ ಫೇಸ್ ಟು ಫೇಸ್ ಕಾರ್ಯಕ್ರಮಕ್ಕೆ ’ದಿ ಬೆಸ್ಟ್ ಕರೆಂಟ್ ಅಫೇರ್ಸ್ ಪ್ರೆಸೆಂಟರ್’ ಎಂಬ ಎರಡನೆ ಪ್ರಶಸ್ತಿಯನ್ನು ಸ್ವೀಕರಿಸಿದರು. 2005ರ ಹಾರ್ಡ್‌ಟಾಕ್ ಇಂಡಿಯಾ ದಲ್ಲಿ ಮಾಜಿ ಇಂಡಿಯಾದ ಕಾನೂನು ಸಚಿವ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ ಅರುಣ್ ಜೈಟ್ಲಿಯವರೊಂದಿಗೆ ನಡೆಸಿಕೊಟ್ಟ ಸಂದರ್ಶನಕ್ಕೆ ’ಬೆಸ್ಟ್ ಕರೆಂಟ್ ಅಫೈರ್ಸ್ ಪ್ರೆಸೆಂಟರ್' ಪ್ರಶಸ್ತಿ ಪಡೆಯುವ ಮೂಲಕ 1999ರಿಂದ ಸತತ ಮೂರನೆಯ ಬಾರಿಗೆ ಈ ಪ್ರಶಸ್ತಿಗೆ ಪಾತ್ರರಾದರು.ಅವರು ’ಬೆಸ್ಟ್ ಕರೆಂಟ್ ಅಫೈರ್ಸ್ ಪ್ರೆಸೆಂಟರ್' ಪ್ರಶಸ್ತಿಯನ್ನು ಮತ್ತೆ 2007ರಲ್ಲಿ ಡೆವಿಲ್ಸ್ ಅಡ್ವೊಕೇಟ್‌ ನಲ್ಲಿ ಪ್ರಸಾರವಾದ ರಾಮ್ ಜೇಟ್ ಮಲಾನಿಯವರೊಂದಿಗಿನ ಸಂದರ್ಶನಕ್ಕಾಗಿ ಗಳಿಸಿದರು.2008ರಲ್ಲಿ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್‌ನಲ್ಲಿ ಡೆವಿಲ್ಸ್ ಅಡ್ವೊಕೇಟ್‌ ನ ಬೆಸ್ಟ್ ನ್ಯೂಸ್/ಕರೆಂಟ್ ಅಫೇರ್ಸ್ ಪ್ರದರ್ಶನ’ ಲಭಿಸಿತು & ಇಂಡಿಯನ್ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅವಾರ್ಡ್ಸ್‌ನಲ್ಲಿ ’ವರ್ಷದ ನ್ಯೂಸ್ ಸಂದರ್ಶನಕಾರ’ ಪ್ರಶಸ್ತಿಯನ್ನು ಕರಣ್ ಥಾಪರ್ ಅವರು ಉಡುಗೊರೆಯಾಗಿ ನೀಡಿದರು 2009ರ ಏಪ್ರಿಲ್‌ನಲ್ಲಿ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲಿ ಅತ್ಯುನ್ನತವಾದ ಗೌರವಾನ್ವಿತ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಕರಣ್ ಥಾಪರ್ ಅವರಿಗೆ ನೀಡಿ ಗೌರವಿಸಲಾಯಿತು ಹಾಗೂ ಆ ವರ್ಷದ ’ಜರ್ನಲಿಸ್ಟ್ ಆಫ್ ದಿ ಇಯರ್ (ಬ್ರಾಡ್‌ಕಾಸ್ಟ್)’ ಗೌರವಕ್ಕೆ ಸಹ ಪಾತ್ರರಾದರು. 2009ರ ಆಗಸ್ಟ್‌ನಲ್ಲಿ ಇಂಡಿಯನ್ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅವಾರ್ಡ್ಸ್‌ನಲ್ಲಿ "ನ್ಯೂಸ್ ಶೋ ಹೋಸ್ಟ್ ಆಫ್ ಥೆ ಇಯರ್" ಪಡೆದುಕೊಂಡರು == ಟೀಕೆಗಳು == ಸಂದರ್ಶನಾರ್ಥಿಗಳಿಗೆ ಅವರ ಅನಿಸಿಕೆಗಳನ್ನು ಹೇಳಲು ಬಿಡುವುದಿಲ್ಲವೆಂಬ ವಿಮರ್ಶೆಗೆ ಕೆಲವು ಬಾರಿ ಗುರಿಯಾಗಿದ್ದು ಇದೆ, ಹಾಗೂ ಸಂದರ್ಶನಾರ್ಥಿಗಳು ಮಾತನಾಡುವಾಗ ಮಧ್ಯೆ ಮಧ್ಯೆ ಥಾಪರ್‌ ಅವರು ಮಾತನಾಡುವುದು ಕೂಡ ವಿಮರ್ಶೆಗೆ ಗುರಿಯಾಗಿದೆ. ತನ್ನ ಸುವ್ಯವಸ್ಥಿತ ಅನ್ವೇಷಣೆಗಳಿಂದ ಹಾಗೂ ಮಾತಿನ ಮೋಡಿಯಿಂದ ಸಂದರ್ಶನಾರ್ಥಿಗಳ ಮುಂದೆಯೇ ಎಲ್ಲವನ್ನೂ ಹೊರಗೆಳೆಯುವ ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ. == ವಿವಾದಗಳು == ಥಾಪರ್ ಅವರು ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು "ಅನಿರೀಕ್ಷಿತವಾಗಿ ತೆಗೆದುಹಾಕಿದಾಗ" ಇಂಟರ್ನೆಟ್‌ನ ಮೂಲಕ ಪ್ರತಿಭಟನೆಯನ್ನು ಕರೆದರು, 2007ರ ಡಿಸೆಂಬರ್ 29ರಂದು ಹಿಂದುಸ್ಥಾನ್ ಟೈಮ್ಸ್‌ನಲ್ಲಿ ಪ್ರಕಟವಾದ "ಮಾಡಿಫಿಕೇಶನ್ ಆಫ್ ಪಾಲಿಟಿಕ್ಸ್" ನಲ್ಲಿ ಸಂಪ್ರದಾಯಬದ್ದವಲ್ಲದ ಹಾಗೂ ಹಿಡಿಸದ ಕಾರ್ಯಗಳನ್ನು ಪ್ರೋತ್ಸಾಹಿಸುವಂತಹ ಅನೈತಿಕ ಅರ್ಥವಿವರಣೆಯನ್ನು ನೀಡಿದೆ ಎಂದಿದ್ದಾರೆ. ಥಾಪರ್ ಅವರ ಗೋಹರ್ ಅಯೂಬ್ ಖಾನ ಜೊತೆಯ ಸಂದರ್ಶನ ವನ್ನು ಪ್ರತಿಭಟನೆಗೆ ಗುಟ್ಟಾಗಿ ಪ್ರೇರಣೆ ನೀಡಿದೆ ಎಂದು ಟೀಕಿಸಿದ್ದಾರೆ. == ಪುಸ್ತಕಗಳು == - ಕರಣ್ ಥಾಪರ್ ಜೊತೆಗಿನ ಸಂಭಾಷಣೆಗಳು , , 0143033441 , ವಿಸ್ಡಮ್ ಟ್ರೀ, 8183280234 - , , 9788172237769 == ಟಿಪ್ಪಣಿಗಳು == == ಹೊರಗಿನ ಕೊಂಡಿಗಳು == ' ' 2005 2013-12-09 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ ' ' 2008-06-07 ವೇಬ್ಯಾಕ್ ಮೆಷಿನ್ ನಲ್ಲಿ. 2009-05-11 ವೇಬ್ಯಾಕ್ ಮೆಷಿನ್ ನಲ್ಲಿ. 2010-01-03 ವೇಬ್ಯಾಕ್ ಮೆಷಿನ್ ನಲ್ಲಿ.